Sunday, August 17, 2014

ಬಾ ಬೆಳಕೇ

ನಿನ್ನೆ ಎಂಬುದರ ನೆನಪು ಅಳಿಸಿ
ನಾಳೆ ಉದಯದ ಕನಸು ಉಳಿಸಿ
ಇಂದಿನ ದಿನದ ಅರ್ಥವ ತಿಳಿದು
ಕಲಿಕೆಯ  ಪಥದಲಿ ಸಾಗುತಿದೆ ಬದುಕು ....

ಹಸಿರಾಗಿದೆ ಮನಸು ಭತ್ತದ ಸಸಿಗಳಂತೆ
ನಿರ್ಮಲವಾಗಿದೆ ಹರಿವ ನೀರಿನಂತೆ
ದೃಡವಿದೆ ಬೆಟ್ಟದ ಕಪ್ಪು ಬಂಡೆಯಂತೆ
ಹಳೆಯ ನೆನಪುಗಳು ನೋವಾಗಿ  ಚುಚ್ಚುತಿದೆ ...

ಸೊರಗಿದ ಮನಕೆ ಉಸಿರಾಗಿ ಬಾ ಬೆಳಕೆ
ಕಾಣದ ದಾರಿ ತೋರುವ ದೀಪವಾಗಿ
ಕತ್ತಲೆಯಿಂದ  ಬೆಳಕಿನೆಡೆ ಸಾಗಲಿ ಬದುಕು
ನಕ್ಷತ್ರದಂತೆ ಅಲ್ಲದಿದ್ದರೂ ಮಿಣುಕು ಹುಳದಂತೆ  ಮಿನುಗಲಿ ಬದುಕು
ಬಾ ಬೆಳಕೇ ಒಮ್ಮೆ ಬಾಳದೀವಿಗೆಯಾಗಿ 

Wednesday, August 13, 2014

ನಮ್ಮೂರ ಮಳೆ

ಮಳೆಗಾಲದಲ್ಲಿ ಮಳೆ ಬಂದಾಗ ಅಕ್ಕ ಪಕ್ಕಗಳಲ್ಲಿ  ಬಿದ್ದ ನೀರು  ಹನಿ ಹನಿಯಾಗಿ ಒಂದುಗೂಡಿ ಚರಂಡಿ ,ತೋಡುಗಳಲ್ಲಿ ಹರಿದು ತಿರುಗಿ ಹೊಳೆಯಾಗಿ ಪ್ರವಾಹವಾಗುತ್ತವೆ .....
ಇದು ನಾವು ಪ್ರಾಥಮಿಕ ಶಾಲೆಯಲ್ಲಿ ಬರೆದ ಮಳೆಗಾಲದ ಒಂದು ದಿನ ಪ್ರಬಂಧ .
.................................................. .................................................. ..................................................

ಈ ಮಳೆಗೋ  ಶಾಲೆಗಳು ಬಿಡುವ ಸಮಯ,ಆಟವಾಡುತಿರುವಾಗ ,ಬಸ್ ಬಂದಾಗ,ಬಟ್ಟೆ ಬಿಸಿಲಿಗೆ ಹಾಕಿದಾಗ, bike ಲಿ ಹೋಗುತಿರುವಾಗ ,ಕೈಲಿ documents /loveletter  ಇದ್ದಾಗ ಅನೀರೀಕ್ಷಿತವಾಗಿ ಬಂದು ದಬ ದಬ ದಬ ಅಂತ ಸುರಿದು ಹೋಗುವುದೆಂದರೆ ತುಂಬಾ ಪಿರುತಿ ..

ನಮ್ಮೂರಲ್ಲಿ ಮಳೆಗಾಲ ಅಂದ್ರೆ ರಸ್ತೆಯಲ್ಲಿ ತುಂಬಿಕೊಂಡಿರುವ ಹೊಂಡಗಳೂನ್ನು ತಪ್ಪಿಸಲಾಗದೆ ಬೀಳುವವರು, ಬಸ್ಸು ,ಕಾರುಗಳ ಚಕ್ರಗಳಿಂದ ಹಾರಿದ ಕೆಂಪು ನೀರು ಶಾಲೆ ಮಕ್ಕಳ ಬಿಳಿ  ಶರ್ಟ್ ಗೆ  ಬೀಳುವುದು , ಅದನ್ನು ಕೊಡೆ ಹಿಡಿದು ತಪ್ಪಿಸಿಕೊಳುವುದು  , ಪ್ಲಾಸ್ಟಿಕ್ ಕೊಪ್ಪೆ ಹಾಕಿ ಗದ್ದೆ ನಾಟಿಗೆ ಹೋಗುವವರು,  ಸಂಕದಲ್ಲಿ ನೆಗ್ಸಿನ  ಕಾಯಿ ಹಿಡಿಯುವುದು,
ಸೊಪ್ಪಿನ ಹೊರೆಯನ್ನು ಸೈಕಲ್ ಮೇಲೆ ತರುವ ಗಂಡಸರ , quarter ಕುಡಿಯಲು ಗದ್ದೆ,ಹೊಳೆಯನ್ನು ಹಾದು ಬರುವವರು ,
ಕೆಂಪು ನೀರು ಬಂದಿದೆ ಎಂದು ಗಾಳ ಹಾಕುವವರು, ಹಾಕಲು ಶೆಟ್ಟರ್ ಅಂಗಡಿಗೆ ಸಿಸ , ತಂಗಿಸ್ ಗೆ line ನಿಲ್ಲುವವರು ,
 ಗಾಳ ಮಾಡಿ ಕೊಡುವ ಚಡ್ಡಿಬಾಳನ ಹಿಂದೆ ೩-೪  ಮಕ್ಕಳು ಗಾಳಕಾಗಿ,  ಗದ್ದೆಯಲ್ಲಿ ಗುಳ್ಳೆ ಹೆಕ್ಕಲು & ಮೀನು ಕಡಿಯಲು ಸೊಂಟಕ್ಕೆ ಕತ್ತಿ  ಕಟ್ಟ ಕೆಕ್ಕರು ಗೌಡ್ರು,ಬಲೆ ಬಿಸಿ ಕುಳಿತ ಮೋಹನ್ ಅಂಬಿಗನು,  ಅಣಬೆಗಾಗಿ ಹುತ್ತ,ಬೆಟ್ಟ ಹುಡುಕುವ ಜನರು,
 break ಇಲ್ಲದ ಗಾಡಿಯಲ್ಲಿ ಅಡಿಕೆ ಮದ್ದು ಹೊಡೆಯುವ  ಪಾಂಡುರಂಗನ ಬರುವಿಕೆಗೆ ಕಾಯುವ ಜನ... ಇವೆಲ್ಲ ಕಾಮನ್ ....

ಬಂದ ಮಳೆ ಸುಮ್ಮನೆ ಸುರಿಯದೆ ನೆನಪುಗಳ ಬೀಜಕ್ಕೆ ನೀರೆರೆದು ಹೋಗೊತ್ತೆ
ಅದೆಕೋ ಶಾಲೆಗಳಿಂದ  ಮಳೆಯಲ್ಲಿ ನೆನೆಯುತ್ತ ಸಾವೇರ ನ ಜೊತೆ ಬೊಳುಗುಡ್ಡದ ನೀರಿನ ತೊರೆಯಲ್ಲಿ color color ದೋಣಿ ಬಿಡುವುದು ಯಾರ ದೋಣಿ ಜಾಸ್ತಿ ದೂರ ತೆಲೋತ್ತೆ ಅಂತ ನೋಡುವುದು ಕೊನೆಗೆ ಕಾಗದ ಮುಗಿದು notebookನ  middle ,ಕೊನೆಯ ಹಾಳೆಗಳನ್ನೂ ಹರಿದು ದೋಣಿಮಾಡಿ ಬಿಡುವುದು ., ಗಣ್ಣಿಯ ಸುಳು ಕಥೆಗಳನ್ನೂ ಕೇಳುತ್ತ ಮಠದ ಗುಂಡಿಯಲ್ಲಿ ಚಂದ್ರಪ್ರಭೆಗೆ ಬರುವ ನೆಗ್ಸಿನ ಆ ನೀರಿನಲ್ಲೂ ಕಟ್ಟಿಗೆ ,ನಾಟು  ,ಕಾಯಿ ಹಿಡಿಯುವ ರಾಮಕೃಷ್ಣ bridge  ತುಂಬಿದಾಗ  ದಾಟಿಸುತಿದ್ದ . .

ಇನ್ನು ತೋಟಕ್ಕೆ ನೀರು ಬಂದಾಗ ಸುನಿಲ್  ಜೊತೆ ಬಟ್ಟೆ ವದ್ದೆ ಮಾಡಿಕೊಂಡು ಹಾದು ನೆಗ್ಸನ್ನು ನೋಡಿ , ಗದ್ದೆಯ ನೀರಿನಲ್ಲೇ ಮುಳುಕು ಹಾಕಿ ಮಿಸಾಡಿ , ಸಮತಟ್ಟಾಗಿ  ಹರಿಯುವ ಹೊಳೆ ನೋಡಿ ಅದ್ರ ಮೇಲೆ ನಡೆಯಲು ಬಂದಿದರೆ ...


ದೊಡ್ಡ ನೆಗ್ಸಿನಲ್ಲಿ ಬರುವ ,ಕಟ್ಟಿಗೆ ನಾಟುಗಳಿಗೆ  ರಾಮಕೃಷ್ಣ ,ಗಣ್ಣೀ  ನಾಟಿನ  ಮೇಲೆ ಸೆಳೆತದಲ್ಲೂ  ಕುಳಿತುಕೊಂಡು ಹೋಗಿ ಹಿಡಿಯುತಿದ್ದರು ,ಇನ್ನು ತುಳಸುವಂತೂ ಭತ್ತದ ಸಸಿಗಳನ್ನು ತೆಪ್ಪದ ಹಂಗೆ ಮಾಡಿ ಆದರಲ್ಲಿ ಕುಳಿತು ತರುತಿದ್ದ & ಮಾರನೆ ದಿನ ಸಿಕ್ಕಾಗ ನಾನು ತತ್ತೆ  ಹೇಳಿ  ಮತ್ತೆ ಯಾರು ಹಂಗೆ ತರುದಿಲ್ರ ಅದ್ಕೂ  ಕಲೆಬೇಕು .... 

ಅಂಬಿಗ ಮೋಹನ್ ಸುಮಾರು  ೩೦೦ ಕಾಯಿ ಹಿದ್ದ ,ಕಟ್ಟಿಗೆ ಅಂತು ೨-೩ ಗಾಡಿ ಆಗುದು  ರಾತ್ರೆ ದೊಡ್ಡ ನೀರು ಬಂದಿತಕು  ನಾಟು ಸಂಕಕ್ಕೆ ಹೊಡಿದು  ಸಂಕ ಮುರ್ದು ಬಲ್ಕೊಂದು ಹೋಯ್ತು ,ನಾನು ಚಂದವರ್ ಮೇಲಿಂದ ಬಂದೆ late ಆಗೋಯ್ತು ಎಂದು ಕೆಲಸಕ್ಕೆ ಬರುವ ನಾರಾಯಣ ..

ಕೆಲಸದ ಲಕ್ಷಿಯಂತು  "ಮಳೆ ಬತ್ತದೆ ಹೋಗ್ತದೆ ಬಟ್ಟೆ ಹಾಕಿ ತೆಗ್ಡಿ ಸಾಕು ಆಗೋಯ್ತು ಎಷ್ಟು ಹುಳಕುಮಾಡ್ತದೆ .... ಅದೇನೋ ಹೇಳ್ತ್ರಲ್ಲ  ಮಳೆಗಾಲದ ಮಳೆ ಪ್ರಾಯದ ಹುಡುಗಿಯನ್ನು ನಂಬುಕೆ ಆಗಂತೆ ಹವ್ದ್ರ "...

ಇನ್ನು ಅಡಿಕೆಗೆ ಕೊಳೆ ಮದ್ದು ಹೊಡೆಯಲು  ಪಾಂಡುರಂಗನ ಗಾಡಿಗೆ  ಕೈ ಮಾಡಿದ್ರೆ  ೧೦ ಮಾರುಹೋಗಿ ಸುಯ್ ಎಂದು ಕಾಲು ಕೊಟ್ಟು ತಿರುಗಿಸ್ಕೊಂದು ಬಂದು ಹೆಂಗ್ರ  break ಇಲ್ಲ ಅದ್ರು ಒಂದು ಹೋಂಡ  ಹಾರ್ಸುದಿಲ್ಲ ಎಲ್ಲಿ ಬೇಕೋ ಅಲ್ಲಿ ಹೊಗ್ತೆ ಬ್ಯಾಲೆನ್ಸ್ ಬೆಕ್ರ...  ಮದ್ದು ನಾಳೆ ಬೇಡ್ರಾ ಚಡ್ಡಿ ಬಾಳ ಹೊಡಿತಮ್ತೆ  ಅವ ಹೊಡಿಯುವಾಗ ಮಳೆಜೋರೆ ಬತದೆ ...

ನಮ್ಮ ಕರಾವಳಿಯ ಮಳೆ ನೋಡಿ ಬಯಲು ನಾಡಿನವರು ಬಸ್ಸಿನಲ್ಲಿ "ಜನ ಇರೋ ಕಡೆ ಮಳೆ ಬರೋತ್ತೆ ನಮ್ಮ ಹೊಲದಾಗೆ ಬಂದ್ರೆ ಬಂಗಾರದಂಗ ಬೆಳೆ ಬೇಳಿತಿದ್ವಿ ,ಸಮುದ್ರ ಇರೋ ಕಡಿಗೆ ಜಾಸ್ತಿ ಸುರಿಬೇಕ  ಈ ಮಳಿ ... ನಿಮ್ಮಗೆ ಏನು ಸಮುದ್ರ ಇದೆ ನೀರಿಗೆ ಬರ ಇಲ್ಲ.... ..


ಮಳೆಯಲ್ಲಿ ನೆನೆಯುವಾಗ ಅಳುವುದು ಯಾರಿಗೂ ಗೊತ್ತಾಗುವುದಿಲ್ಲ ....  ಮಳೆಯೇ ಕಣ್ಣಿರನ್ನು ಒರೆಸುತ್ತದೆ...